Skip to main content

ಬದಲಾವಣೆಗೆ ತಕ್ಕ ಪ್ರತಿಫಲ

            ಎಲ್ಲರಿಗೂ ನಮಸ್ಕಾರ ನಾನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುರುಬಗಟ್ಟಿಯಲ್ಲಿ ಸಹ ಅಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.


ನಾನು ವಿದ್ಯಾ ಪೋಷಕ ವತಿಯಿಂದ ಲೋ ಸಹ ಶಿಕ್ಷಕಿ ಆಗಿ ಈ ಶಾಲೆಯಲ್ಲಿ ಎರಡು ವರ್ಷಗಳ ಕಾಲ ವಿಜ್ಞಾನ ಗಣಿತ ಹಾಗೂ ಇಂಗ್ಲಿಷ್ ವಿಷಯವನ್ನು ಆರು ಮತ್ತು ಏಳನೇ ತರಗತಿಗೆ ಬೋಧಿಸಿದ್ದೇನೆ.


ಈ ಒಂದು ಕಥೆಯಲ್ಲಿ ನನ್ನ ಒಂದು ವಿದ್ಯಾರ್ಥಿಯ ಬದಲಾವಣೆ ಕುರಿತು ವಿವರಿಸುತ್ತೇನೆ.


ನಾನು ಈಗಿನ ಆರನೇ ತರಗತಿ ಮಕ್ಕಳಿಗೆ ವಿಜ್ಞಾನ ಮತ್ತು ಗಣಿತ ವಿಷಯವನ್ನು ಬೋಧಿಸುತ್ತೇನೆ ಇದರಲ್ಲಿ ಒಟ್ಟಾರೆಯಾಗಿ 49 ವಿದ್ಯಾರ್ಥಿಗಳು ಇದ್ದರು ನನಗೆ ವಿಜ್ಞಾನ ಮತ್ತು ಗಣಿತ ವಿಷಯವನ್ನು ಬೋಧಿಸುವುದರ ಜೊತೆಗೆ ಅವರಿಗೆ ಕೆಲವೊಂದು ಸ್ಪರ್ಧೆಗಳನ್ನು ಇಡುತ್ತಿದ್ದೆ ಹಾಗೆ ಅವರಲ್ಲಿ ಕಲಿಯುವಿಕೆಯಲ್ಲಿ ಮಾತನಾಡುವಿಕೆಯಲ್ಲಿ ಓದುವುದರಲ್ಲಿ ಬರೆಯುವುದರಲ್ಲಿ ಹೀಗೆ ಹಲವಾರು ವ್ಯತ್ಯಾಸಗಳನ್ನು ನಾನು ಕಂಡಿದ್ದೇನೆ



 ಅದರಲ್ಲಿ ಒಂದು ವಿದ್ಯಾರ್ಥಿಯು ಸ್ಕೂಲಿಗೆ ಬರುತ್ತಿದ್ದಿಲ್ಲ ಏಕೆಂದರೆ ಕರೋನಾ ಮುಗಿದ ನಂತರ ಅವನಿಗೆ ಶಾಲೆ ಪಾಠ ಶಿಕ್ಷಕರು ಅಂದರೆ ಏನೋ ಒಂದು ಭಯ ಇತ್ತು ಹೀಗೆ ನಾನು ಪ್ರತಿದಿನ ಹಾಜರಿ ತೆಗೆದುಕೊಳ್ಳುವಾಗ ಆ ಒಂದು ವಿದ್ಯಾರ್ಥಿ ಗೈರು ಹಾಜರಿರುತ್ತಿದ್ದ ನಾನು ಒಂದು ಎರಡು ವಾರಗಳ ಸುಮ್ಮನಿದ್ದೆ ಆನಂತರ ಗೆಳೆಯರನ್ನು ವಿಚಾರಿಸಿದಾಗ ಅವನು ತುಂಬಾನೇ ಬುದ್ಧಿವಂತ ವಿದ್ಯಾರ್ಥಿಯಾಗಿದ್ದ ಆದರೆ ಕರೋನ ಬಂದ ನಂತರ ಅವನಿಗೆ ಶಾಲೆಗೆ ಬರುವುದು ಅಭ್ಯಾಸ ಮಾಡುವುದು ಅವನಿಗೆ ಇಷ್ಟವಾಗುತ್ತಿದ್ದಿಲ್ಲ. 


ಹಾಗಾಗಿ ಅವನನ್ನು ಶಾಲೆಗೆ ಕರೆ ತರಲು ನಾನು ಅವನಿಗೆ ಮತ್ತು ಅವನ ಪೋಷಕರಿಗೆ ಕರೆ ಮಾಡಿದೆ ಅವಾಗು ಕೂಡ ಅವರ ಪೋಷಕರು ಅವನಿಗೆ ಶಾಲೆಗೆ ಹೋಗು ಎಂದಾಗಲು ಅವನು ಯಾವುದೇ ರೀತಿ ಶಾಲೆಗೆ ಬರಲು ಒಪ್ಪಿಕೊಳ್ಳುತ್ತಿದ್ದಿಲ್ಲ ಒಂದು ದಿನ ನಾನು ಅವನ ಮನೆಗೆ ಹೋದೆ ಅವನು ನನ್ನನ್ನು ನೋಡಿ ಅವಿತುಕೊಳ್ಳಲು ಆರಂಭಿಸಿದ ಆನಂತರ ನಾನು ಅವನಿಗೆ ನನ್ನ ಸಮಯ ಕರೆದುಕೊಂಡು ಅವನನ್ನು ಪ್ರೀತಿಯಿಂದ ಮಾತನಾಡಿಸಿದೆ ಅದರ ಜೊತೆಗೆ ಅವನಿಗೆ ನೀನು ಶಾಲೆಗೆ ಬಂದರೆ ನಿನ್ನಷ್ಟು ಬುದ್ಧಿವಂತ ವಿದ್ಯಾರ್ಥಿ ನಮ್ಮ ತರಗತಿಯಲ್ಲಿ ಯಾರೂ ಇಲ್ಲ ನೀನೇ ಮೊದಲು ಬರುತ್ತಿ ಕ್ಲಾಸಿಗೆ ಹಾಗೆ ಅವನಿಗೆ ನೀನು ಶಾಲೆಗೆ ಬ್ಯಾಗ್ ತರಬೇಡ ಒಂದು ಪುಸ್ತಕ ಒಂದು ಪೆನ್ನು ಅಷ್ಟೇ ತೆಗೆದುಕೊಂಡು ಬಾ, ನಿನ್ನನ್ನೇ ನಾನು ಕ್ಲಾಸಿನ ಲೀಡರ್ ಮಾಡುತ್ತೇನೆ ಹಾಗೆ ನಿನಗೆ ಯಾವ ರೀತಿ ಇಷ್ಟಾನೋ ಆ ರೀತಿ ನೀನು ಕ್ಲಾಸಿಗೆ ಕೂರಬಹುದು ಮತ್ತು ನಿನಗೆ ಯಾವ ವಿಷಯ ಇಷ್ಟ ಅದನ್ನು ಕೂಡ ನೀನು ಕಲಿಯಬಹುದು ಅದರ ಜೊತೆಗೆ ಆಟ ಆಡಿಸುತ್ತೇನೆ ಚಿತ್ರ ತೆಗಿಸುತ್ತೇನೆ ಹೀಗೆ ಹಲವಾರು ರೀತಿ ಅವನಿಗೆ ಖುಷಿ ಪಡಿಸುತ್ತಾ ಅವನನ್ನು ನಾಳೆಯಿಂದ ಶಾಲೆಗೆ ಬರಬೇಕೆಂದು ಹೇಳಿ ಬಂದೆ.


 ಮಾರನೇ ದಿನಾ ನೋಡಿದರೆ ಅವನು ನಾನು ಹೇಳಿದ ಹಾಗೆ ಶಾಲೆಗೆ ಒಂದು ಪೆನ್ನು ಒಂದು ಪುಸ್ತಕ ಅಷ್ಟೇ ತೆಗೆದುಕೊಂಡು ಬಂದ ಅವತ್ತಿನ ದಿನ ಅವನು ಗೆಳೆಯರ ಜೊತೆ ಕೂರಲು ಹಿಂಜರಿದ ಆ ಒಂದು ಕ್ಲಾಸಿನಲ್ಲಿ ನಾನು ಅವನಿಗೆ ಗೆಳೆಯರನ್ನು ಮಾಡಿಸಿ ಕೊಟ್ಟೆ ಹಾಗೆ ಆ ಒಂದು ಕ್ಲಾಸಿನಲ್ಲಿ ಹಾಡು ನಾಟಕ ಆಟ ಈ ಮುಖಾಂತರ ಆ ಒಂದು ಕ್ಲಾಸ್ ಕಲಿಸಿದೆ ಇದರಿಂದ ಅವನು ತುಂಬಾನೇ ಖುಷಿ ಪಟ್ಟ ಹಾಗೆ ಅವನೇ ಬಂದು ಹೇಳಿದ ಮೇಡಂ ನಾನು ನಾಳೆಯಿಂದ ಶಾಲೆಗೆ ಬ್ಯಾಗ್ ಹಾಕಿಕೊಂಡು ಬರುತ್ತೇನೆ ಇನ್ನು ಮುಂದೆ ಶಾಲೆ ತಪ್ಪಿಸುವುದಿಲ್ಲ ಎಂದ,



ಅದೇ ರೀತಿ ಅವನು ದಿನಾಲು ಶಾಲೆಗೆ ಬರಲು ಪ್ರಾರಂಭಿಸಿದ ಅದರ ಜೊತೆಗೆ ಎಲ್ಲಾ ವಿಷಯಗಳನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದ ಜೊತೆಗೆ ಅವನಿಗೆ ಬಂದಿರುವ ಡೌಟ್ ಮತ್ತು ಅವನ ಕ್ಲಿಷ್ಟಕರ ವಿಷಯಗಳನ್ನು ನನ್ನ ಹತ್ತಿರ ಬಂದು ಹೇಳಲು ಆರಂಭಿಸಿದ ಹಾಗೆ ಅವನಿಗೆ ನಾನು ಸಹಾಯವನ್ನು ಕೂಡ ಮಾಡುತ್ತಿದ್ದೆ ಹಾಗೆ ವಿಷಯವನ್ನು ತಿಳಿಸಿ ಹೇಳುತ್ತಿದೆ ಹೀಗೆ ಮುಂದುವರೆಯುತ್ತಾ ನಂದು ಮತ್ತು ಆ ವಿದ್ಯಾರ್ಥಿಯು ಒಂದು ಒಳ್ಳೆ ಸಂಬಂಧ ಅವನಿಗೆ ನಾನು ಫೇವರೆಟ್ ಟೀಚರ್ ಆದೆ ಹಾಗೆ ಅವನ ಬದಲಾವಣೆಯನ್ನು ನೋಡಿ ಅವನ ತಂದೆ ತಾಯಿಗಳು ಕೂಡ ನನಗೆ ಕರೆ ಮಾಡಿ ಧನ್ಯವಾದಗಳು ಕೂಡ ಹೇಳಿದ್ದರು ಹಾಗೆ ಈ ವಿದ್ಯಾರ್ಥಿಯು ಓದುವುದು ಬರೆಯುವುದಲ್ಲದೆ ಎಲ್ಲಾ ಸ್ಪರ್ಧೆಗಳಲ್ಲಿಯೂ ಭಾಗವಹಿಸುತ್ತಿದ್ದಾನೆ.



 ಅದರ ಜೊತೆಗೆ ಗೆಳೆಯರ ಜೊತೆ ಉತ್ತಮ ಬಾಂಧವ್ಯವನ್ನು ಕೂಡ ಹೊಂದಿದ್ದಾನೆ ಹಾಗೆ ಅವನಿಗೆ ನಾನು ಎರಡು ವರ್ಷ ನನ್ನ ಮುಗಿದ ನಂತರ ಹೋಗುತ್ತೇನೆ ಅನ್ನೋದು ಕೂಡ ಅವನಿಗೆ ಬೇಜಾರಾಗಿದೆ, ಅವನು ಅತ್ತನು ಕೂಡ 


ಹಾಗೆ ಇಂತಹ ಒಂದು ಒಳ್ಳೆಯ ಶಾಲೆ ವಿದ್ಯಾರ್ಥಿಗಳು ನನಗೆ ಪರಿಚಯ ಮಾಡಿಸಿಕೊಟ್ಟ ವಿದ್ಯಾ ಪೋಷಕ ಸಂಸ್ಥೆಗೆ ಧನ್ಯವಾದಗಳು ಹೇಳಲು ಇಷ್ಟಪಡುತ್ತೇನೆ ಹಾಗೆ ನನಗೆ ಈ ಒಂದು ಶಿಕ್ಷಕಿಯಾಗಿ ನೇಮಕಗೊಂಡಿದ್ದರಿಂದ ನನ್ನಲ್ಲಿ ನಾನು ಹಲವಾರು ಬದಲಾವಣೆಯನ್ನು ಕೂಡ ಕಂಡುಕೊಂಡಿದ್ದೇನೆ ಅದರ ಜೊತೆಗೆ ಉತ್ತಮ ಶಿಕ್ಷಕಿ ಕೂಡ ಆಗಿದ್ದೇನೆ ಮತ್ತು ಎಲ್ಲ ವಿದ್ಯಾರ್ಥಿಗಳು ಪೋಷಕರು ಇಂದ ನನಗೆ ಒಳ್ಳೆಯ ಪ್ರೀತಿ ಮತ್ತು ಗೌರವ ದೊರೆತಿದೆ .


                            ಥ್ಯಾಂಕ್ಯು ವಿದ್ಯಾ ಪೋಷಕ


 ಸುಷ್ಮಾ ಅಪ್ಪನವರ್

   ಸಹ ಶಿಕ್ಷಕಿ 

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುರುಬಗಟ್ಟಿ


Comments

Popular posts from this blog

Vidya Poshak - Yuva Internship 2025 Application Live Now

  Vidya Poshak Yuva Internship 2025-26 Vidya Poshak is seeking passionate and committed individuals who see the role of teachers as not just a knowledge-building exercise but are excited by the prospect of looking at teaching as a transformative journey for self and children. Vidya Poshak strongly believes that education is the solution for ending poverty. We envision that  "every child deserves an excellent education." A six-month internship opportunity for aspiring teachers followed by a one-year fellowship. Eligibility *Graduate (Freshers are also eligible) *Age less than 26 years *Prior volunteering experience in any field would be preferable Requirements: *Passion to teach *Ready to work with rural school children *Communication and presentation skills *Kannada and English language proficiency *Basic computer knowledge *Ability to create learning materials *Ability to set goals and track progress About the role: *Designing goals and vision for your classroom *Planning an...

📚 “ಪುಸ್ತಕ ಜೋಳಿಗೆ” ಕಾರ್ಯಕ್ರಮ

           “ಪುಸ್ತಕ ಜೋಳಿಗೆ” ಕಾರ್ಯಕ್ರಮ    ನಮ್ಮ ಶಾಲೆಯಲ್ಲಿ ಇತ್ತೀಚೆಗೆ ಒಂದು ಮಹತ್ವದ ಹಾಗೂ ಪ್ರೇರಣಾದಾಯಕ ಕಾರ್ಯಕ್ರಮ ನಡೆಯಿತು. ನಮ್ಮ ಮುಖ್ಯಶಿಕ್ಷಕರಾದ ಶ್ರೀಮಾನ್‌ ___ ಅವರು ತಮ್ಮ ವೈಯಕ್ತಿಕ ಪುಸ್ತಕ ಸಂಗ್ರಹದಿಂದ 84 ಪುಸ್ತಕಗಳನ್ನು ಶಾಲಾ ಗ್ರಂಥಾಲಯಕ್ಕೆ ದಾನ ಮಾಡಿದರು. ಈ ಪುಸ್ತಕಗಳಲ್ಲಿ ವಿವಿಧ ವಿಷಯಗಳ ಕಥೆಗಳು, ವಿಜ್ಞಾನ, ಇತಿಹಾಸ, ಜೀವನ ಮೌಲ್ಯಗಳು ಹಾಗೂ ಪ್ರೇರಣಾದಾಯಕ ವ್ಯಕ್ತಿಗಳ ಜೀವನಚರಿತ್ರೆಗಳು ಸೇರಿವೆ. ವಿದ್ಯಾರ್ಥಿಗಳು ಈ ಪುಸ್ತಕಗಳನ್ನು ಓದಿ ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಮತ್ತು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಲು ಇದು ಒಳ್ಳೆಯ ಅವಕಾಶವಾಗಿದೆ. ಪುಸ್ತಕಗಳು ನಮ್ಮ ಉತ್ತಮ ಸ್ನೇಹಿತರು. ಅವು ನಮ್ಮ ಕಲ್ಪನೆಗೆ ಪंख ನೀಡುತ್ತವೆ, ವಿಚಾರಶಕ್ತಿಯನ್ನು ಬೆಳೆಯಿಸುತ್ತವೆ ಹಾಗೂ ಜೀವನದಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಾರ್ಗದರ್ಶನ ಮಾಡುತ್ತವೆ. ಈ ಕಾರ್ಯಕ್ರಮದ ಮೂಲಕ ನಮ್ಮ ಶಾಲೆಯ ಗ್ರಂಥಾಲಯವು ಇನ್ನಷ್ಟು ಸಮೃದ್ಧವಾಗಿದೆ. ನಮ್ಮ ಎಲ್ಲಾ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಮಾಡಿಕೊಂಡು, ಹೆಚ್ಚು ಓದಿ, ಹೆಚ್ಚು ಕಲಿತು, ಜ್ಞಾನಸಂಪನ್ನರಾಗಲಿ ಎಂಬುದು ನಮ್ಮ ಹಾರೈಕೆ. "ಒಂದು ಪುಸ್ತಕ – ಒಂದು ಹೊಸ ಲೋಕದ ಪ್ರವೇಶದ್ವಾರ!"

My students

     The students wrote their notes very neatly and clearly. The handwriting is clean and easy to read. They also drew nice pictures to help understand the lesson better. This shows their interest and hard work in learning. It is a good habit that helps in studying well. I felt very happy during the fair checking. after i appreciated that students.    It show the love on the subject and interest on the subject.  I feel very happy.  Most of the students wrote very well. Thank you.