ನವೆಂಬರ್ ೧೮ ರಂದು ನಮ್ಮ ಶಾಲೆಯಲ್ಲಿ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು. ಈ ದಿನ ವಿಶೇಷವಾಗಿ ಕನಕದಾಸರ ಜೀವನ ಮತ್ತು ಅವರ ಭಕ್ತಿಯು ಸಮಾಜಕ್ಕೆ ನೀಡಿದ ಸಂದೇಶಗಳನ್ನು ಸ್ಮರಿಸಲಾಯಿತು. ಅಂದು ಬೆಳಿಗ್ಗೆ 8:30 ಕ್ಕೆ ನಾನು ಶಾಲೆಗೆ ಹಾಜರಾದೆನು. ನಮ್ಮ ವಿದ್ಯಾರ್ಥಿಗಳಲ್ಲಿ ಒಬ್ಬರು ಮಂತ್ರಗಳನ್ನು ಪಠಿಸಿ ಪೂಜೆಗೆ ಚಾಲನೆ ನೀಡಿದರು. ನಮ್ಮ ಹೆಚ್ಎಮ್ ಸರ್ ಕನಕದಾಸರ ಜೀವನವನ್ನು ವಿವರಿಸಿ, ಅವರ ಭಕ್ತಿಗಣ ಮತ್ತು ಸಮಾಜದಲ್ಲಿ ಉಂಟುಮಾಡಿದ ಬದಲಾವಣೆಗಳನ್ನು ಕುರಿತು ಮಾತನಾಡಿದರು. ನಂತರ, ಕೆಲವು ವಿದ್ಯಾರ್ಥಿಗಳು ಭಾಷಣಗಳನ್ನು ಮಾಡಿದರು ಮತ್ತು ಕನಕದಾಸರ ಭಕ್ತಿಗೀತೆಗಳನ್ನು ಹಾಡಿದರು. ನಂತರ ನಾವೆಲ್ಲರೂ ಸೇರಿ ಕನಕದಾಸರ ಹಾಡುಗಳನ್ನು ಆಲಿಸಿದೆವು. ಇವುಗಳಲ್ಲಿ "ಕುಲ ಕುಲವೆಂದು ಹೊಡೆದಾಡದಿರಿ" , "ದಾಸನಾಗು ವಿಶೇಷನಾಗು " ಮತ್ತು "ನಿನ್ನಂತಗಬೇಕೊ ಕನಕ" ಎಂಬ ಕನಕದಾಸರ ಪ್ರಸಿದ್ಧ ಗೀತೆಗಳನ್ನು ಆಲಿಸಿದೆವು. ಈ ಹಾಡುಗಳು ಕನಕದಾಸರ ಭಕ್ತಿಯ ಹಾಗೂ ಸಾಮಾಜಿಕ ಸಮಾನತೆಯ ಸಂದೇಶಗಳನ್ನು ಸಾರುತ್ತಿವೆ .
ನಮ್ಮ ಶಾಲೆಯ ಕನ್ನಡ ರಾಜ್ಯೋತ್ಸವ ಆಚರಣೆ – ಸ್ಮರಣೀಯ ದಿನ 🌟 ಇಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಲೋಕೂರ ನಲ್ಲಿ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಭಕ್ತಿ, ಉತ್ಸಾಹ ಮತ್ತು ಹೆಮ್ಮೆಯಿಂದ ಆಚರಿಸಲಾಯಿತು. ಬೆಳಿಗ್ಗೆ 7:30ಕ್ಕೆ ನಾನು ಶಾಲೆಗೆ ಆಗಮಿಸಿದೆ. ದಿನದ ಕಾರ್ಯಕ್ರಮಗಳಿಗೆ ತಯಾರಿ ಮಾಡುವುದನ್ನು ಆರಂಭಿಸಿದರು. ಮೊದಲು ನಾವು ಪೂಜೆ ವ್ಯವಸ್ಥೆ ಮಾಡಿ, ದೇವರ ಆಶೀರ್ವಾದದೊಂದಿಗೆ ದಿನವನ್ನು ಶುರು ಮಾಡಿದೆವು. ನಂತರ ನಾನು ದಿನದ ಕಾರ್ಯಕ್ರಮಕ್ಕೆ ಹೊಂದುವಂತೆ ಬೋರ್ಡ್ ಬರೆಯುವ ಕೆಲಸ ಮಾಡಿಕೊಂಡೆ. ಪೂಜೆ ನಂತರ ಮುಖ್ಯ ಕಾರ್ಯಕ್ರಮ ಆರಂಭವಾಯಿತು. ಇಂದಿನ ದಿನದ ಅತ್ಯಂತ ಹೆಮ್ಮೆಗೊಳಿಸುವ ಕ್ಷಣ ಎಂದರೆ ನಮ್ಮ 7ನೇ ತರಗತಿಯ ವಿದ್ಯಾರ್ಥಿಗಳು ಸಂಪೂರ್ಣ ಕಾರ್ಯಕ್ರಮವನ್ನು ಸ್ವತಃ ಯೋಜಿಸಿ, ನೇತೃತ್ವ ವಹಿಸಿ, ನಿರ್ವಹಿಸಿದರು. ಶಿಕ್ಷಕರ ಮಾರ್ಗದರ್ಶನ ಇರುವುದಿದ್ದರೂ, ವಿದ್ಯಾರ್ಥಿಗಳಲ್ಲಿ ಕಂಡ ಜವಾಬ್ದಾರಿ, ಶಿಸ್ತು ಮತ್ತು ನಾಯಕತ್ವವು ನಿಜವಾಗಿಯೂ ಶ್ಲಾಘನೀಯ. ಕಾರ್ಯಕ್ರಮವು ನಾಡಗೀತೆ ರಾಷ್ಟ್ರಗೀತೆ ಯನ್ನು ಹೇಳುವುದರ ಮುಖಾಂತರ ಆರಂಭವಾಗಿ ವಿದ್ಯಾರ್ಥಿಗಳ ಭಾಷಣಗಳು, ಕನ್ನಡ ನಾಡನ್ನು ಕೊಂಡಾಡುವ ಗೀತೆಗಳು, ಹಾಗೂ ರಾಜ್ಯೋತ್ಸವದ ಕುರಿತು ...

Comments
Post a Comment