"ಹೃದಯವಂತ ಶಿಕ್ಷಕರಿಗೆ ಪ್ರಶಂಸೆಯ ಸನ್ಮಾನ" 💖

GHPS MANGALAGATTI

 ನಾನು ಒಬ್ಬ ಶಿಕ್ಷಕಿಯಾಗಿ, ನನ್ನ ಜೀವನದಲ್ಲಿ ಹಲವು ಗೌರವದ ಕ್ಷಣಗಳು ಬಂದಿದ್ದರೂ, ಈ ಸಮಯದಲ್ಲಿ ನನ್ನ ಶಿಕ್ಷಣ ಸೇವೆಗೆ ನೀಡಲಾದ ಸನ್ಮಾನವು ಹೃದಯದಲ್ಲಿ ಸದಾ ನೆನಪಾಗಿ ಉಳಿಯಲಿದೆ.

೨ ಆಗಸ್ಟ್ ೨೦೨೫ ರಂದು ಮಂಗಳಗಟ್ಟಿ ಗ್ರಾಮದಲ್ಲಿ ನಡೆದ ನಿವೃತ್ತ ಶಿಕ್ಷಕರ ಸಮ್ಮೇಳನದಲ್ಲಿ, ಹೃದಯವಂತ ಶಿಕ್ಷಕರಿಗೆ ಗೌರವ ನೀಡಲಾಯಿತು. ನನಗೂ ಆ ಗೌರವ ದೊರಕಿದ್ದು ಬಹಳ ಸಂತೋಷ ತಂದಿತು. ನನ್ನ ಪ್ರಯತ್ನ, ನಿಷ್ಠೆ ಮತ್ತು ವಿದ್ಯಾರ್ಥಿಗಳಿಗೆ ಮಾಡಿದ ಸೇವೆಯನ್ನು ಗುರುತಿಸಿ, ನನ್ನಿಗೆ ಸನ್ಮಾನ ಮಾಡಲಾಯಿತು. ನಾನು ಹೃದಯಪೂರ್ವಕವಾಗಿ ಹಂಚಿಕೊಳ್ಳಲು ಬಯಸುವ ಕ್ಷಣವೆಂದರೆ “ವಿಜಯವಾಣಿ” ಪತ್ರಿಕೆಯಲ್ಲಿ ನನ್ನ  ಭಾವಚಿತ್ರ ಹಾಗೂ ಕಾರ್ಯಕ್ಕೆ ಸಿಕ್ಕ ಸನ್ಮಾನ.”

ಮಂಗಳಗಟ್ಟಿ ಗ್ರಾಮದಲ್ಲಿ ನಡೆದ ಶ್ರೀ ಆಭಿನವ ಶಾಂತಲಿಂಗ ಶಿವಾಚಾರ್ಯರು ಅಖಿಲ ಕರ್ನಾಟಕ ನಿವೃತ್ತ ಶಿಕ್ಷಕರ ಸಮ್ಮೇಳನದ ಸಂದರ್ಭದಲ್ಲಿ ಇತರ ಶಿಕ್ಷಕರನ್ನು ಹೃದಯವಂತ ಶಿಕ್ಷಕರಾಗಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಬಗೆಯುವ ಪುಟ್ಟ ಸಹಾಯವನ್ನು ಗುರುತಿಸಿ ಪ್ರಶಂಸೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ವಿವಿಧ ಶಿಕ್ಷಕರ ಸೇವೆಗಳನ್ನು ನೆನೆಯುವ ಮೂಲಕ ಅವರಿಗೆ ಸನ್ಮಾನಿಸಲಾಯಿತು. ನನ್ನ ಕೆಲಸವನ್ನು ಜನತೆ, ಶಾಲಾ ಆಡಳಿತ ಮತ್ತು ಸಂಘಟಕರಿಂದ ಗುರುತಿಸಿಕೊಂಡಿದ್ದು ನನಗೆ ಹೊಸ ಉತ್ಸಾಹ ಕೊಟ್ಟಿದೆ.
ಇದರಲ್ಲಿಯೇ ವಿಶೇಷವೆಂದರೆ  ಈ ಸನ್ಮಾನ ಮತ್ತು ನನ್ನ ಬಾವಚಿತ್ರವು “ವಿಜಯವಾಣಿ” ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ನನ್ನ ಶಿಕ್ಷಕ ಜೀವನದಲ್ಲಿ ಹೆಮ್ಮೆಯ ಕ್ಷಣವಾಯಿತು. ಪತ್ರಿಕೆಯಲ್ಲಿ ನನ್ನನ್ನು ಗುರುತಿಸಿಕೊಂಡು ಕುಟುಂಬದವರು, ಸಹೋದ್ಯೋಗಿಗಳು ಮತ್ತು ಸ್ನೇಹಿತರು ಸಂತೋಷ ವ್ಯಕ್ತಪಡಿಸಿದರು.
ಧನ್ಯವಾದಗಳು  😊









Comments

Post a Comment

Popular posts from this blog

Vidya Poshak - Yuva Internship 2024 - Application form

Frequently Asked Questions about Internship 2023

ಇತಿಹಾಸದ ಹನುಮ ದೇವಸ್ಥಾನ