Skip to main content

ನನ್ನ ವಿದ್ಯಾರ್ಥಿ, ನನ್ನ ಹೆಮ್ಮೆ

ನನ್ನ ವಿದ್ಯಾರ್ಥಿ, ನನ್ನ ಹೆಮ್ಮೆ

 ಒಂದು ವರ್ಷದ ನನ್ನ ಫೆಲೋಶಿಪ್ ನ ಅವಧಿಯಲ್ಲಿ ನಾನು ಸಾಕಷ್ಟು ವ್ಯಕ್ತಿಗಳನ್ನು ನೋಡಿದೆ ಜೊತೆಗೆ ಸಾಕಷ್ಟು ಅನುಭವಗಳನ್ನು ಪಡೆದಿದ್ದೇನೆ .ಶಾಲೆ, ಆಫೀಸು, ಮನೆ ಕೆಲಸ ಇದೆ ನನ್ನ ಪ್ರಪಂಚವಾಗಿ ಬಿಟ್ಟಿತ್ತು .ನನಗೆ ಶಾಲೆಯಲ್ಲಿ ನನ್ನ ವಿದ್ಯಾರ್ಥಿಗಳ ಜೊತೆಗೆ ಕಾಲ ಕಳೆಯುವುದೆಂದರೆ ಬಹಳ ಇಷ್ಟವಾಗಿತ್ತು.




 ನನ್ನ ಶಾಲೆ ಇರುವುದು ಧಾರವಾಡ ಜಿಲ್ಲೆಯ ಒಂದು ಸಣ್ಣ ಹಳ್ಳಿಯಾಗಿತ್ತು .ಊರಿನ ಪರಿಸರ ,ಜನ,ಭಾಷೆ, ಪದ್ಧತಿ ಎಲ್ಲವೂ ನನಗೆ ಹೊಸದಾಗಿತ್ತು. ಶಾಲೆಯ ದೊಡ್ಡದಾದ ಆವರಣ ಕಟ್ಟಡ ಅಲ್ಲಿನ ಸಾಲು ಸಾಲು ತೆಂಗಿನ ಮರ ತರಗತಿಗಳು ಇವೆಲ್ಲವೂ ನನಗೆ ಹೊಸ ಅನುಭವವನ್ನು ನೀಡಲು ಬರಮಾಡಿಕೊಳ್ಳುವಂತಿತ್ತು .ಅಲ್ಲಿನ ಶಿಕ್ಷಕರು ಮುಖ್ಯೋಪಾಧ್ಯಾಯರು ಮತ್ತು ವಿದ್ಯಾರ್ಥಿಗಳು ಎಲ್ಲರೂ ನನಗೆ ಹೊಸ ವ್ಯಕ್ತಿಗಳಾಗಿದ್ದರು.


ಆಗಿನ್ನೂ ಅಗಸ್ಟ್ ತಿಂಗಳ ಪ್ರಾರಂಭ ಸೋನೆಮಳೆಯಂತೆ ಶಾಲೆಗೆ ಮಕ್ಕಳು ಬರುತ್ತಿದ್ದರು. ಕೊರೋನಾ ಎಂಬ ದೊಡ್ಡ ಭೂತದ ಭಯದಿಂದ ಅಡಗಿ ಕೂತಿದ್ದ ಮಕ್ಕಳು ನಿಧಾನವಾಗಿ ಮನೆಯಿಂದ ಹೊರಬರಲು ಪ್ರಾರಂಭಿಸುತ್ತಿದ್ದರು. ಮಕ್ಕಳಿಲ್ಲದೆ ಬಿಕೋ ಎನ್ನುತ್ತಿದ್ದ ಶಾಲೆಯ ಆವರಣ ತರಗತಿಗಳು  ಅಲ್ಪಸ್ವಲ್ಪ ವಿದ್ಯಾರ್ಥಿಗಳಿಂದ ಕಳೆ ಪಡೆಯಲು ಆರಂಭಿಸಿತ್ತು .ಆಸಮಯದಲ್ಲಿ ನಾನು ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಕಲಿಸಲು ಆರಂಭಿಸಿದ್ದೆ. ಅಷ್ಟು ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿಯ ಮೇಲೆ ನನ್ನ ಗಮನ ಹರಿಯಿತು. ಅಗಲವಾದ ದೇಹ, ದುಂಡನೆಯ ಮುಖ, ಕಂದು ಬಣ್ಣ, ಸಾಧಾರಣ ಎತ್ತರ, ಮುದ್ದುಮುಖ ಆತನ ನಡವಳಿಕೆ ಕೆಲವು ನನಗೆ ಆಕರ್ಷಕವಾಗಿತ್ತು.


ಶಾಲೆ ಪ್ರಾರಂಭವಾಗಿ ಕೆಲವು ತಿಂಗಳುಗಳ ನಂತರ ನಾನು ಗಮನಿಸಿದ ವಿದ್ಯಾರ್ಥಿಯ ನಡವಳಿಕೆ ನನಗೆ ನಿಧಾನವಾಗಿ ತಿಳಿಯತೊಡಗಿತು. ಅವನು ಪ್ರತಿದಿನ ತನ್ನ ಸ್ನೇಹಿತರೊಂದಿಗೆ ಜಗಳವಾಡುತ್ತಿದ್ದ. ಒಮ್ಮೆಯಂತೂ ಒಬ್ಬ ನಾಲ್ಕನೇ ತರಗತಿಯ ಹುಡುಗನ ಕೈ ಕಚ್ಚಿ ಬಿಟ್ಟಿದ್ದ. ಆ ಚಿಕ್ಕ ಹುಡುಗನ ಕೈ ಮೇಲೆ ಈತನ ಅಲ್ಲಿನ ಅಚ್ಚುಗಳು ಮೂಡಿದ್ದವು. ರಕ್ತ ಸುರಿಯಲಾರಂಭಿಸಿತು ಅದನ್ನು ನೋಡಿದ ನನಗೆ ಆಶ್ಚರ್ಯವಾಗಿತ್ತು ಹುಡುಗನ ಮೇಲೆ  ಗದರಿದೆ. ಅದಾದ ನಂತರ ಪ್ರತಿ ತರಗತಿಯಲ್ಲೂ ಆತನದು ಒಂದು ಕೆಲಸ ಇದ್ದೇ ಇರುತ್ತಿತ್ತು. ಜಗಳವಾಡುವಾಗ ಅವನ ಮುಖ ಕೋಪದಿಂದ ಕಾಣಿಸುತ್ತಿತ್ತು.  ಆದರೆ ಅಭ್ಯಾಸದಲ್ಲಿ ಸ್ಪರ್ಧೆಗಳಲ್ಲಿ ಯಾವಾಗಲೂ ಹಿಂದೆ ಇರುತ್ತಿದ್ದ. ಆತನಿಗೆ ಬರೆಯುವುದೆಂದರೆ ಬಹಳ ಕಷ್ಟದ ಕೆಲಸವಾಗಿತ್ತು . ಆತನ ಆ ನಡವಳಿಕೆಯಿಂದ ಆತನನ್ನು ಖಾಸಗಿ ಶಾಲೆಯಿಂದ ವರ್ಗಾಯಿಸಲಾಗಿತ್ತು. ಇವನ ಕಾಟ ತಾಳಲಾರದೆ ಶಾಲೆಯಲ್ಲಿ ಒಬ್ಬ  ಶಿಕ್ಷಕಿ ಶಾಲೆಯನ್ನೇ ಬಿಟ್ಟು ಹೋದರು ಎಂದು ತರಗತಿಯಲ್ಲಿ ಮಕ್ಕಳು ಹಾಸ್ಯ ಮಾಡುತ್ತಿದ್ದರು .ಇನ್ನೂ ಕೆಲವರು ಆ ಹುಡುಗ ಒಬ್ಬ ಮಾನಸಿಕ ರೋಗಿ ಎಂದು ಹೀಯಾಳಿಸುತ್ತಿದ್ದರು.


ಶಾಲೆಯ ಶಿಕ್ಷಕರು ಆತನನ್ನು ತಿದ್ದಬೇಕೆಂದು ಕೂಡ ಮನಸ್ಸು ಮಾಡಲಿಲ್ಲ. ಇದೆಲ್ಲವನ್ನು ನೋಡಿದ ನನಗೆ ಆ ಹುಡುಗನನ್ನು ಒಬ್ಬ ಒಳ್ಳೆಯ ವಿದ್ಯಾರ್ಥಿಯನ್ನು ಆಗಿ ಮಾಡಬೇಕೆನಿಸಿತು. ಅವನೆಲ್ಲ ಋಣಾತ್ಮಕ ಗುಣಗಳನ್ನು ಹೊರತುಪಡಿಸಿ ಅವನಲ್ಲಿರುವ ಒಂದು ಧನಾತ್ಮಕ ಗುಣವನ್ನು ಎತ್ತಿ ಹಿಡಿಯಬೇಕೆಂದು ನಿರ್ಧರಿಸಿದೆ.


ಅವನ ನಡವಳಿಕೆಯನ್ನು ತಿದ್ದಲು ನಾನು ಆತನ ಪಾಲಕರನ್ನು ಕರೆಸಿ ಮಾತನಾಡಿದೆ .ಆದರೆ ಆತನ ತಾಯಿ ಮನೆಯಲ್ಲಿಯೂ ನಮ್ಮ ಮಾತನ್ನು ಕೇಳುವುದಿಲ್ಲ ಟೀಚರ್ ನೀವೇ ಏನಾದರೂ ಮಾಡಿ ಆತನನ್ನು ಸರಿ ಮಾಡಬೇಕು ಎಂದು ನನ್ನ ನನಗೆ ಜವಾಬ್ದಾರಿ ನೀಡಿದರು .ಒಂದು ದಿನ ಆತನನ್ನು ಕರೆದು ಮಾತನಾಡಿದೆ. ನನಗೆ ತಿಳಿದ ವಿಷಯವೆಂದರೆ ಆತನಿಗೆ ನಾನು ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದೆನು. ಇದನ್ನು ತಿಳಿದ ನನಗೆ ಬಹಳ ಸಂತೋಷವಾಯಿತು ಇದನ್ನೇ ಉಪಯೋಗಿಸಿಕೊಂಡು ನಾನು ಆತನಿಂದ ಪ್ರಮಾಣ ಮಾಡುವಂತೆ ಹೇಳಿದೆ. ನೀವು ಹೇಳಿದಂತೆ ಕೇಳುತ್ತೇನೆ ಎಂದು ನನಗೆ ಪ್ರಮಾಣ ಮಾಡಿದನು. ಅಂದಿನಿಂದ ಅವನು ತರಗತಿಯಲ್ಲಿ  ನನ್ನ ಮಾತನ್ನು ಚಾಚೂತಪ್ಪದೆ ಕೇಳಲು ಪ್ರಾರಂಭಿಸಿದ. ಪ್ರತಿದಿನ ಶಾಲೆಗೆ ಬೇಗ ಬರುತ್ತಿದ್ದ ಯಾರೊಂದಿಗೂ ಜಗಳವಾಡದೇ ತನ್ನ ಕೆಲಸವನ್ನು ತಾನು ಮಾಡಿಕೊಳ್ಳುತ್ತಿದ್ದ ನಾನು ಇಟ್ಟಂತಹ ಪರೀಕ್ಷೆಯಲ್ಲಿ 15 ಅಂಕಗಳಿಗೆ 13 ಅಂಕಗಳನ್ನು ಪಡೆದಿದ್ದ ವಿಜ್ಞಾನ ಮಾದರಿಗಳನ್ನು ಬಹಳ ಉತ್ಸಾಹದಿಂದ ಮಾಡುತ್ತಿದ್ದನು. ತರಗತಿಯ ಎಲ್ಲಾ ಚಟುವಟಿಕೆಗಳಲ್ಲಿ ಉತ್ತಮವಾಗಿ ಭಾಗವಹಿಸುತ್ತಿದ್ದ .ಪ್ರತಿದಿನ ಶಾಲೆಯ ಪ್ರಾರ್ಥನೆಯಲ್ಲಿ ಎಲ್ಲ ಶಿಕ್ಷಕರು ವಿದ್ಯಾರ್ಥಿಗಳ ಎದುರೆದುರು ವಚನಗಳನ್ನು ಧೈರ್ಯವಾಗಿ ಓದುತ್ತಿದ್ದ ಇದನ್ನು ನೋಡಿದ ಕೆಲ ಶಿಕ್ಷಕರು ಆಶ್ಚರ್ಯಗೊಂಡರು. ಈತನಿಗೆ ಓದಲು ಬರುತ್ತಾ? ಎಂದು ನನಗೆ ಪ್ರಶ್ನಿಸಿದ್ದರು ಆಗ ನಾನು ಹೆಮ್ಮೆಯಿಂದ ಹೌದು ಎಂದು ಉತ್ತರಿಸಿದ್ದೆ.

ಇದಾದ ನಂತರ ಶಾಲೆಯ ಕೊನೆಯ ತಿಂಗಳಲ್ಲಿ ವಿದ್ಯಾಪೋಷಕ್ ಹಾಗೂ ಸ್ಲ್ಯಾಮ್ ಔಟ್ ಲೌಡ್ ಅವರು ಏರ್ಪಡಿಸಿದ ಶೋಕೇಸ್ ಕಾರ್ಯಕ್ರಮದಲ್ಲಿ ಆ ಹುಡುಗ ಹೆಣ್ಣು ಮಗಳ ವೇಷಭೂಷಣವನ್ನು ಧರಿಸಿ ನಾಟಕವನ್ನು ಮಾಡಿದ ಇದನ್ನು ಕಂಡ ಎಲ್ಲ ಶಿಕ್ಷಕರಿಗೂ ಆಶ್ಚರ್ಯವಾಗಿತ್ತು. ಆದರೆ ನನಗೆ ಮಾತ್ರ ಹೆಮ್ಮೆಯ ವಿಷಯವಾಗಿತ್ತು.



Comments

Popular posts from this blog

Paper Boat – An Activity Based on Poetry

Paper Boat – An Activity Based on Poetry The students of 5th standard participated in a creative classroom activity based on the poem “The Paper Boat” written by Rabindranath Tagore. To understand the poem better, students made paper boats using their own unique ideas. On this day, Mr. Vijay visited the class and observed the session. He appreciated the students’ creativity and the innovative paper boats they had made. The poem was explained in Kannada, which helped the students clearly understand its meaning. The students enjoyed the activity and showed great interest in the lesson. The session made learning joyful, creative, and meaningful.

ಪ್ರತಿಭಾ ಕಾರಂಜಿ – ಮಕ್ಕಳ ಕನಸುಗಳಿಗೆ ವೇದಿಕೆ

 GHPS Mangalagatti ನಮ್ಮ ಶಾಲೆಯ ಮಕ್ಕಳ ಸಿಹಿ ಸಾಧನೆ  GHPS Lokur ನಲ್ಲಿ ಈ ಬಾರಿ ಕ್ಲಸ್ಟರ್ ಲೆವೆಲ್ ಪ್ರತಿಭಾ ಕಾರಂಜಿಯನ್ನು ಹಬ್ಬದ ಸಂಭ್ರಮದಲ್ಲಿ ನಡೆಸಲಾಯಿತು. ಹಲವಾರು ಶಾಲೆಗಳ ಮಕ್ಕಳು ಒಂದೇ ವೇದಿಕೆಯಲ್ಲಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು.  ನಮ್ಮ ಶಾಲೆಯ ಮಕ್ಕಳು ಉತ್ಸಾಹದಿಂದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು ಹಾಡು, ನೃತ್ಯ, ಭಜನೆ, ಚಿತ್ರಕಲೆ, ಕಥೆ ಹೇಳುವಿಕೆ ಮತ್ತು ಇನ್ನಷ್ಟು. ಮಕ್ಕಳು ವೇದಿಕೆಯ ಮೇಲೆ ಮಿಂಚಿದ ಕ್ಷಣಗಳು ಎಲ್ಲರಿಗೂ ಹೆಮ್ಮೆ ತಂದವು. ಸ್ಪರ್ಧೆಗಳ ಅಂತ್ಯದಲ್ಲಿ ನಮ್ಮ ಶಾಲೆಯ ಮಕ್ಕಳು ಹಲವಾರು ವಿಭಾಗಗಳಲ್ಲಿ ವಿಜಯ ಸಾಧಿಸಿ ವಿಶೇಷ ಬಹುಮಾನಗಳನ್ನು ಪಡೆದರು. ಮಕ್ಕಳು ಬಹುಮಾನ ಸ್ವೀಕರಿಸಿದಾಗ ಅವರ ಮುಖದಲ್ಲಿ ಹೊಳೆದ ಮುದ್ದಾದ ನಗು ಎಲ್ಲರ ಹೃದಯ ಗೆದ್ದಿತು.    thank you

Parents meeting

               A parents’ meeting was organized by the Vidya Poshak organization. Many parents participated in the meeting. During the meeting, parents discussed their children’s handwriting, academic progress, and learning levels with the school teachers. The objectives and activities of the Vidya Poshak organization were clearly explained by the organization’s teacher, Ms. Aishwarya. All the parents extended their cooperation and support, which helped in successfully completing the parents’ meeting.