ಗುರು ಪೂರ್ಣಿಮೆಯ ವಿಶೇಷತೆ

 




                                                 ಗುರು ಪೂರ್ಣಿಮೆಯ ವಿಶೇಷತೆ 

 ಕಲ್ಲೆ ಗ್ರಾಮದಲ್ಲಿ ಇರುವ  ಸರಕಾರಿ ಹಿರಿಯ ಪ್ರಾಥಮಿಕ  ಶಾಲೆಯ  ಏಳನೇ ತರಗತಿಯ ಮಕ್ಕಳು ಸ್ವತಃ ತಾವೇ ಅವಲೋಕನ ಮಾಡಿ , ಗುರುಗಳಿಗೆ ವಂದನೆ ಹೇಳುವ ಕುರಿತು ಮಾಡಿದ ಒಂದು ಕಾರ್ಯಕ್ರಮ . ಎಲ್ಲ ಏಳನೇ ತರಗತಿಯ ಮಕ್ಕಳು ಹರುಷದಿಂದ  ಮತ್ತು ಹೊಂದಾಣಿಕೆಯಿಂದ ಕಾರ್ಯಕ್ರಮವನ್ನು ನಡೆಸಿ ಆ ಕಾರ್ಯಕ್ರಮಕ್ಕೆ ಮೆರಗು ತಂದರು . 
ನಮ್ಮ ಶಾಲೆಯ ಪ್ರಧಾನ  ಗುರುಗಳಾದ   , ಶ್ರೀಯುತ ಗುರುಪುತ್ರಣವರ  ಗುರುಗಳು ಅಧ್ಯಕ್ಷ ಸ್ಥಾನದಲ್ಲಿದ್ದು  ಉಳಿದ ಸಹ ಶಿಕ್ಷಕರಾದ   ಸಾತನ್ನವರ್ ಗುರುಗಳು , ಚಕ್ರಸಾಲಿ ಗುರುಗಳು , ಸಾವಿತ್ರಿ ಗುರುಗಳು ,ದೀಪಾ ಪತ್ತಾರ ಗುರುಗಳು, ಸಹ ಉಪಸ್ಥಿತರಿದ್ದರು . ತುಂಬಾ ಚೆನ್ನಾಗಿ ಮಕ್ಕಳು ಕಾರ್ಯನಿರ್ವಹಿಸಿದರು . ಮತ್ತು ತುಂಬಾ ವಿಧೇಯವಾಗಿ ನಮನವನ್ನು ಸಲ್ಲಿಸಿದರು . 
ಎಲ್ಲ ಗುರುಗಳಿಗೆ ಡೈರಿ ಹೂವಿನ ಸಸಿಯನ್ನು ನೀಡುವುದರೊಂದಿಗೆ ಮಕ್ಕಳು ಎಲ್ಲ ಗುರುಗಳಿಗೆ ನಮನ ಸಲ್ಲಿಸಿದರು . ನಮ್ಮ ಶಾಲೆಯ ಪ್ರಧಾನ ಗುರುಗಳಾದ ಶ್ರೀಯುತ ಗುರುಪುತ್ರಣವರ್ ಗುರುಗಳು  " ಹರ ಮುನಿದರು ಗುರು ಕಾಯುವನು "  ಎಂಬ ವೇದ ವಾಕ್ಯವನ್ನು ಪರಿಚಯಿಸಿ  ಅದರೊಂದಿಗೆ ಗುರುವಿನ ಮಹತ್ವವನ್ನು ತಿಳಿಸಿದರು .  ಮತ್ತು ನಮ್ಮ ಶಾಲೆಯ ಪ್ರಧಾನ ಗುರುಗಳು ವಿದ್ಯಾರ್ಥಿಗಳು ಉಡುಗೊರೆಯಾಗಿ ತಂದ ಡೈರಿ ಹೂವಿನ ಸಸಿಯನ್ನು ವಿದ್ಯಾರ್ಥಿಗಳಿಗೆ ನೀಡಿ, ನೆಟ್ಟು ಪೋಷಿಸಿ ಎಂಬ ಕಿವಿಮಾತನ್ನು ವಿದ್ಯಾರ್ಥಿಗಳಿಗೆ ಅವುಗಳ ಜವಾಬ್ದಾರಿಯನ್ನು ನೀಡಿದರು . ಆ ಎಲ್ಲ ಸಸಿಗಳ ಮೇಲುಸ್ತುವಾರಿಯನ್ನು ಶಾಲೆಯ  ವಿದ್ಯಾರ್ಥಿನಿಯಾದ ನೀರಾವರಿ ಮಂತ್ರಿಗಳಾದ ಸೌಜನ್ಯ ವಗೆನ್ನವರ ಗೆ ತಿಳಿಸಿದರು .   ನಮ್ಮ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿಗಳಾದ ರುದ್ರಗೌಡ ರಾಚನಗೌಡ್ರ್, ವೀವೆಕಾನಂದ ವಗೆನ್ನವರ  , ಮತ್ತು ಲಕ್ಷ್ಮಿ ವಗೆನ್ನವರ , ಮೂವರು ವಿದ್ಯಾರ್ಥಿಗಳು ಗುರುಗಳಿಗೆ ತಮ್ಮ ತೊದಲು ನುಡಿಯಲ್ಲಿ ಧನ್ಯವಾದ ಹೇಳಿ  ಈ ಕಾರ್ಯಕ್ರಮಕ್ಕೆ ವಿನಂತಿ ನೀಡಿದರು.

Comments