" ಗಣಪತಿ ಬಪ್ಪ ಮೋರೆಯ ಪುಡಾಚಾ ವರ್ಷಿ ಲೌಕರ್ ಯಾ"

" ಗಣಪತಿ ಬಪ್ಪ ಮೋರೆಯ ಪುಡಾಚಾ ವರ್ಷಿ ಲೌಕರ್ ಯಾ"

               ನಮ್ಮ ಸ ಹಿ ಪ್ರಾ ಶಾಲೆ ಹಳ್ಳಿಗೇರಿ ಯಲ್ಲಿ ಈ ವರ್ಷ ಗಣೇಶ್ ಚತುರ್ಥಿ ತುಂಬಾ ಅದ್ದೂರಿಯಾಗಿ ನಡೆಯಿತು ನಮ್ಮ ಯಲ್ಲ ಮಕ್ಕಳು ತುಂಬಾ ಉತ್ಸುಕ ದಿಂದ ಭಾಗವಹಿಸಿದ್ದರು. ಗಣಪತಿಯ ಮೊದಲನೇ ಆಗಮನದಿಂದ ಕೊನೆಯ 5  ದಿನದ ವರೆಗೂ ಪ್ರತಿ ದಿನ ಪೂಜಾ ಪುನಸ್ಕಾರ ಹಣ್ಣು ಹಂಪಲ ಆರುತಿ ಈ ತರಹದ ವಿಜೃಂಭಣೆ ಇಂದ ಗಣಪತಿ 5 ದಿನ ನಮ ಶಾಲೆಯಲ್ಲಿ ಇದ್ದನು. ಈ ಒಂದು ಪುಣ್ಯ ಕಾರ್ಯದಲ್ಲಿ ನಮ್ಮ ಯಲ್ಲ ಮಕ್ಕಳು ತುಂಬಾ ಚನ್ನಾಗಿ ಕಾರ್ಯ ಮಾಡಿದರು. ನೋಡಲು ತುಂಬಾ ಖುಷಿ ಕೊಡುತ್ತಿತ್ತು.
               ಈ ಒಂದು ಕಾರ್ಯಕ್ರಮದಲ್ಲಿ ನಾನು ಕೂಡ ಭಾಗವಹಿಸಿದ್ದೆ ಎನ್ನುದು ನನಗೆ ತುಂಬಾ ಹೆಮ್ಮೆಯ ವಿಷ್ಯ. ನಾವು ಯಲ್ಲ ತರಗತಿಯ ಶಿಕ್ಷಕರು ಪೂಜೆ ಯಲ್ಲಿ ಭಾಗವಹಿಸುತ್ತೆದ್ದೆವು. ಆರತಿ ಹಾಡಿ ಮಂಗಳಾರುತಿ ಮಾಡುತ್ತಿದ್ದೆವು. ೫ ದಿನದಂದು ಮುಖ್ಯ ಆರುತಿ ಮಾಡಿ ಹಣ್ಣು ಹಂಪಲ ನೈವೇದ್ಯ ಮಾಡಿ ಗಣಪತಿ ವಿಸರ್ಜನೇ ಮಾಡಿದೆವು. ಯಲ್ಲ ಮಕ್ಕಳ ಕಣ್ಣಿನಲ್ಲೂ ಕೂಡ ಗಣಪತಿ ಅಗಲುವಿಕೆಯ ನೋವು ಯದ್ದು ಕಾಣುತಿತ್ತು. ಆದರೆ ಪದ್ದತಿ ಪ್ರಕಾರ ಗಣಪತಿ ವಿಸರ್ಜನೆ ಅತಿ ಮುಖ್ಯವಾಗಿತ್ತು. ಯಲ್ಲ ಮಕ್ಕಳು ಗಣಪತಿ ವಿಸರ್ಜನೇ ಮಾಡಿ ಬಂದು ಪ್ರಸಾದ ತೆಗೆದುಕೊಂಡು ತಮ್ಮ ಮನೆಗಳಿಗೆ ತೆರಳಿದರು.

        

Comments